Leelavathi Baipaditthaya | VIHARA PLUS | ಲೀಲಾವತಿ ಬೈಪಾಡಿತ್ತಾಯ
#ViharaPlus #LeelavathiBaipadithaya #Yakshagana
ಪ್ರಸ್ತುತ ಹಲವು ಮಹಿಳಾ ಕಲಾವಿದೆಯರು, ಭಾಗವತರು ಯಕ್ಷಗಾನದ ರಂಗದಲ್ಲಿ ತೊಡಗಿಸಿಕೊಂಡವರಿದ್ದಾರೆ, ಆದರೆ ಇಂದಿಗೆ ನಲವತ್ತು ವರ್ಷಗಳ ಮೊದಲು ಇಂಥದ್ದು ಕಲ್ಪಿಸುವದು ಸಾಧ್ಯವಿರಲಿಲ್ಲ.
ಆ ಹೊತ್ತಿಗೆ ಯಕ್ಷಗಾನ ಲೋಕ ಪ್ರವೇಶಿಸಿ ಪತಿಯ ಪ್ರೋತ್ಸಾಹದೊಂದಿಗೆ ಹಾಗೂ ಅವರ ಜೊತೆಯಲ್ಲೇ ರಂಗಸ್ಥಳದಲ್ಲಿ ತಮ್ಮದೇ ಸ್ಥಾನವನ್ನು ಗಟ್ಟಿ ಮಾಡಿಕೊಂಡವರು ಲೀಲಾವತಿ ಬೈಪಾಡಿತ್ತಾಯ.
ಪಾರ್ತಿಸುಬ್ಬನ ಊರಾದ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಹುಟ್ಟಿಬೆಳೆದವರು ಲೀಲಾವತಿ ಬೈಪಾಡಿತ್ತಾಯ. ಅಲ್ಲಿದ್ದಾಗ ಹುಡುಗಿಯರು ಯಕ್ಷಗಾನಕ್ಕ ಹೋಗುವ ಯಾವುದೇ ಅವಕಾಶ ಇರಲಿಲ್ಲ. ಆದರೆ ಶಾಸ್ತ್ರೀಯ ಸಂಗೀತವನ್ನು ಮಧೂರು ಪದ್ಮನಾಭ ಸರಳಾಯರಿಂದ ಕಲಿತರು. ಬಡತನದಿಂದಾಗಿ ಶಾಲೆಗೆ ಹೋಗಲಾಗಲಿಲ್ಲ, ಆದರೆ ಅಣ್ಣನಿಂದ ಹಾಗೂ ಇತರರಿಂದ ಅಕ್ಷರಾಭ್ಯಾಸ ಕಲಿತುಕೊಂಡರು. ಆ ಬಳಿಕ ಹಿಂದಿ ವಿಶಾರದ ಕೂಡಾ ಮಾಡಿದ್ದಾರೆ.
೧೯೭೫ರ ಬಳಿಕ ಅವರಿಗೆ ಯಕ್ಷಗಾನ ಸ್ಪರ್ಶ. ತೆಂಕಿನ ಖ್ಯಾತ ಹಿಮ್ಮೇಳದವರಾದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ವಿವಾಹವಾದರು. ಅವರ ಊರು ಕಡಬ. ಅದು ಯಕ್ಷಗಾನದ ಪರಿಸರ. ಅಲ್ಲಲ್ಲಿ ತಾಳಮದ್ದಳೆ ಯಕ್ಷಗಾನ ಇರುತ್ತಿತ್ತು. ಆದರೆ ಸಂಗೀತ ಜ್ಞಾನವಿದ್ದ ಲೀಲಾವತಿ ಬೈಪಾಡಿತ್ತಾಯರಿಗೆ ಮೆಲ್ಲನೆ ಯಕ್ಷಗಾನ ಭಾಗವತಿಕೆಯ ಪರಿಚಯ ಆಯ್ತು, ಅದನ್ನು ಹರಿನಾರಾಯಣರೂ ಪೋಷಿಸಿದರು. ಹಾಗೆ ಮೆಲ್ಲನೆ ಯಕ್ಷಪ್ರಪಂಚಕ್ಕೆ ಅಡಿಯಿಟ್ಟ ಅವರು ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಹಿರಿಮೆಗೆ ಪಾತ್ರರಾದರು. ತಮ್ಮ ಪತಿಯೊಂದಿಗೆ ಸುಬ್ರಹ್ಮಣ್ಯ, ಪುತ್ತೂರು, ಕರ್ನಾಟಕ, ಅರುವ, ಬಪ್ಪನಾಡು ಮೇಳ, ತಲಕಳ ಮುಂತಾದ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ, ೨೫ ವರ್ಷ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸಿದರು.
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡರು.
ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.
ಮೇಳದ ತಿರುಗಾಟವೆಂದರೆ ರಾತ್ರಿಯಿಡೀ ನಿದ್ದೆಗೆಟ್ಟು ಪಯಣಿಸುವುದು. ಕೆಲವೊಮ್ಮೆ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ್ದೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನ ಶ್ರೇಷ್ಟ ಭಾಗವತರಲ್ಲೊಬ್ಬರಾದ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಲೀಲಾ.
ಕಳೆದ ಒಂದು ದಶಕದಲ್ಲಿ, ಬಡಗು ತಿಟ್ಟಿನ ರಂಗದಲ್ಲಿಯೂ ಅವರು ಸುಶ್ರಾವ್ಯವಾಗಿ ಹಾಡಿ, ಬಡಗು ತಿಟ್ಟಿನ ಯಕ್ಷಗಾನ ಕಲಾ ಪ್ರೇಮಿಗಳು ಮತ್ತು ಕಲಾವಿದರ ಮನಸ್ಸನ್ನೂ ಗೆದ್ದಿದ್ದಾರೆ. ಮುಂಬಯಿ, ದೆಹಲಿಯಲ್ಲಿಯೂ ಲೀಲಾ ಅವರು ತಮ್ಮ ಕಂಠ ಸಿರಿಯನ್ನು ಕೇಳಿಸಿದ್ದಾರೆ.
ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡುತ್ತಿದ್ದಾರೆ. ಇದಕ್ಕೆ ಮೊದಲು, ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
Gratitudes to Avinash Baipadithaya(+91 9986266991)
Library Video Courtesy: KRK Bhat Chitramoola & DiGi Yaksha Foundation
Video & Edit : VenuVinod(+91 9448386876)
https://www.youtube.com/c/VIHARAPLUS
Видео Leelavathi Baipaditthaya | VIHARA PLUS | ಲೀಲಾವತಿ ಬೈಪಾಡಿತ್ತಾಯ канала Vihara Plus
ಪ್ರಸ್ತುತ ಹಲವು ಮಹಿಳಾ ಕಲಾವಿದೆಯರು, ಭಾಗವತರು ಯಕ್ಷಗಾನದ ರಂಗದಲ್ಲಿ ತೊಡಗಿಸಿಕೊಂಡವರಿದ್ದಾರೆ, ಆದರೆ ಇಂದಿಗೆ ನಲವತ್ತು ವರ್ಷಗಳ ಮೊದಲು ಇಂಥದ್ದು ಕಲ್ಪಿಸುವದು ಸಾಧ್ಯವಿರಲಿಲ್ಲ.
ಆ ಹೊತ್ತಿಗೆ ಯಕ್ಷಗಾನ ಲೋಕ ಪ್ರವೇಶಿಸಿ ಪತಿಯ ಪ್ರೋತ್ಸಾಹದೊಂದಿಗೆ ಹಾಗೂ ಅವರ ಜೊತೆಯಲ್ಲೇ ರಂಗಸ್ಥಳದಲ್ಲಿ ತಮ್ಮದೇ ಸ್ಥಾನವನ್ನು ಗಟ್ಟಿ ಮಾಡಿಕೊಂಡವರು ಲೀಲಾವತಿ ಬೈಪಾಡಿತ್ತಾಯ.
ಪಾರ್ತಿಸುಬ್ಬನ ಊರಾದ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಹುಟ್ಟಿಬೆಳೆದವರು ಲೀಲಾವತಿ ಬೈಪಾಡಿತ್ತಾಯ. ಅಲ್ಲಿದ್ದಾಗ ಹುಡುಗಿಯರು ಯಕ್ಷಗಾನಕ್ಕ ಹೋಗುವ ಯಾವುದೇ ಅವಕಾಶ ಇರಲಿಲ್ಲ. ಆದರೆ ಶಾಸ್ತ್ರೀಯ ಸಂಗೀತವನ್ನು ಮಧೂರು ಪದ್ಮನಾಭ ಸರಳಾಯರಿಂದ ಕಲಿತರು. ಬಡತನದಿಂದಾಗಿ ಶಾಲೆಗೆ ಹೋಗಲಾಗಲಿಲ್ಲ, ಆದರೆ ಅಣ್ಣನಿಂದ ಹಾಗೂ ಇತರರಿಂದ ಅಕ್ಷರಾಭ್ಯಾಸ ಕಲಿತುಕೊಂಡರು. ಆ ಬಳಿಕ ಹಿಂದಿ ವಿಶಾರದ ಕೂಡಾ ಮಾಡಿದ್ದಾರೆ.
೧೯೭೫ರ ಬಳಿಕ ಅವರಿಗೆ ಯಕ್ಷಗಾನ ಸ್ಪರ್ಶ. ತೆಂಕಿನ ಖ್ಯಾತ ಹಿಮ್ಮೇಳದವರಾದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ವಿವಾಹವಾದರು. ಅವರ ಊರು ಕಡಬ. ಅದು ಯಕ್ಷಗಾನದ ಪರಿಸರ. ಅಲ್ಲಲ್ಲಿ ತಾಳಮದ್ದಳೆ ಯಕ್ಷಗಾನ ಇರುತ್ತಿತ್ತು. ಆದರೆ ಸಂಗೀತ ಜ್ಞಾನವಿದ್ದ ಲೀಲಾವತಿ ಬೈಪಾಡಿತ್ತಾಯರಿಗೆ ಮೆಲ್ಲನೆ ಯಕ್ಷಗಾನ ಭಾಗವತಿಕೆಯ ಪರಿಚಯ ಆಯ್ತು, ಅದನ್ನು ಹರಿನಾರಾಯಣರೂ ಪೋಷಿಸಿದರು. ಹಾಗೆ ಮೆಲ್ಲನೆ ಯಕ್ಷಪ್ರಪಂಚಕ್ಕೆ ಅಡಿಯಿಟ್ಟ ಅವರು ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಹಿರಿಮೆಗೆ ಪಾತ್ರರಾದರು. ತಮ್ಮ ಪತಿಯೊಂದಿಗೆ ಸುಬ್ರಹ್ಮಣ್ಯ, ಪುತ್ತೂರು, ಕರ್ನಾಟಕ, ಅರುವ, ಬಪ್ಪನಾಡು ಮೇಳ, ತಲಕಳ ಮುಂತಾದ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ, ೨೫ ವರ್ಷ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸಿದರು.
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡರು.
ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.
ಮೇಳದ ತಿರುಗಾಟವೆಂದರೆ ರಾತ್ರಿಯಿಡೀ ನಿದ್ದೆಗೆಟ್ಟು ಪಯಣಿಸುವುದು. ಕೆಲವೊಮ್ಮೆ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ್ದೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನ ಶ್ರೇಷ್ಟ ಭಾಗವತರಲ್ಲೊಬ್ಬರಾದ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಲೀಲಾ.
ಕಳೆದ ಒಂದು ದಶಕದಲ್ಲಿ, ಬಡಗು ತಿಟ್ಟಿನ ರಂಗದಲ್ಲಿಯೂ ಅವರು ಸುಶ್ರಾವ್ಯವಾಗಿ ಹಾಡಿ, ಬಡಗು ತಿಟ್ಟಿನ ಯಕ್ಷಗಾನ ಕಲಾ ಪ್ರೇಮಿಗಳು ಮತ್ತು ಕಲಾವಿದರ ಮನಸ್ಸನ್ನೂ ಗೆದ್ದಿದ್ದಾರೆ. ಮುಂಬಯಿ, ದೆಹಲಿಯಲ್ಲಿಯೂ ಲೀಲಾ ಅವರು ತಮ್ಮ ಕಂಠ ಸಿರಿಯನ್ನು ಕೇಳಿಸಿದ್ದಾರೆ.
ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡುತ್ತಿದ್ದಾರೆ. ಇದಕ್ಕೆ ಮೊದಲು, ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
Gratitudes to Avinash Baipadithaya(+91 9986266991)
Library Video Courtesy: KRK Bhat Chitramoola & DiGi Yaksha Foundation
Video & Edit : VenuVinod(+91 9448386876)
https://www.youtube.com/c/VIHARAPLUS
Видео Leelavathi Baipaditthaya | VIHARA PLUS | ಲೀಲಾವತಿ ಬೈಪಾಡಿತ್ತಾಯ канала Vihara Plus
Показать
Комментарии отсутствуют
Информация о видео
Другие видео канала
VALIKUNJA HIKEUnique Yakshagana Artist | Yakshagana Memento | VIHARA PLUSErmai falls | ಎರ್ಮಾಯಿ ಜಲಪಾತ | ಕಡಮಗುಂಡಿ ಜಲಪಾತ | kadamagundi fallsJungle Man | VIHARA PLUS | ಈ ಅಜ್ಜನಿಗೆ ಕಾಡೇ ಪರಮಸುಖ !A Walk In The Western Ghats | VIHARA PLUS | An Unknown WaterfallsBHAMI KONDA | ಭಾಮಿಕೊಂಡ | Vihara PlusDogs mom of MangaloreCycle ride to kanchibailu falls | Vihara PlusMuthappan Daiva | Muthappan In Mangalore | VIHARA PLUSwho is he! where is he from!small interview with Balipa Bhagavatharu | Vihara PlusMonsoon Trek | Western Ghats | Rain Trek | VIHARA PLUSNature Song | Relax Your Mind | VIHARA PLUSRainy ride in Mangalore outskirts | Vihara PlusTrek to Makki Falls | Vihara PlusVIHARA PLUS | Parashuram Temple | ಪರಶುರಾಮ ದೇವಸ್ಥಾನMangaluru's Green Warrior Jeeth | Vihara Plus | ಜೀತ್ ಮಿಲನ್vatapi ganapatim bhaje | ವಾತಾಪಿ ಗಣಪತಿಂ ಭಜೇkavyashri ajeru | ಕಾವ್ಯಶ್ರೀ ಅಜೇರು | VIHARA PLUS | ತಾಳಮದ್ದಳೆಹೊಸ ಪಾವಂಜೆ ಮೇಳ ತಿರುಗಾಟ ಪ್ರಾರಂಭ | new pavanje mela begins tirugaataKANNADI KALLU TREK | ಕನ್ನಡಿ ಕಲ್ಲು ಚಾರಣ | VIHARA PLUS