ಮಕ್ಕಳು ಕಲಿಯಲೇ ಬೇಕಾದ "ಭೂಮಿಕ್ಷಮಾಪಣ ಸ್ತೋತ್ರ"🙏🙏🙏🙏
ಭೂಮಿಕ್ಷಮಾಪಣ ಸ್ತೋತ್ರ
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ ।
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ॥
ಈಗ ಇದರ ಅರ್ಥ ವನ್ನು ತಿಳಿಯೋಣ
: ಭೂದೇವಿಯನ್ನು ಇಲ್ಲಿ ಸುಂದರವಾಗಿ ಸ್ತುತಿಸಿದೆ:
ಸಮುದ್ರವಸನೇ ದೇವಿ: ಅಂದರೆ ಸಮುದ್ರವನ್ನೇ ವಸ್ತ್ರವನ್ನಾಗಿ ಉಳ್ಳಂಥ ಭೂದೇವಿಯೇ; ಭೂಮಿಯು ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಭೂದೇವಿ ಯನ್ನು ಮಹಾಲಕ್ಷ್ಮಿ ಎಂದು ಭಾವಿಸಬೇಕು. ಹೆಣ್ಣು ಎಂದಾದ ಮೇಲೆ ಉಡಲು ಬಟ್ಟೆ ಬೇಕಲ್ಲವೇ? ಇಡೀ ಭೂಮಂಡಲವೆಂಬ ದೇವಿಗೆ ಬೇಕಾಗುವ ಬಟ್ಟೆಯು ಅತ್ಯಂತ ಅಗಲವಾಗಿ, ದೊಡ್ಡದಾಗಿರಬೇಕಲ್ಲವೇ? ಹೀಗಾಗಿ ಸಮುದ್ರವೇ ಭೂದೇವಿಗೆ ಬಟ್ಟೆಯಂತಿರುತ್ತದೆ. ಭೂಮಂಡಲವನ್ನು ವಿಶಾಲವಾದ ಸಮುದ್ರವು ಆವರಿಸಿರುತ್ತದೆ. ಆದ್ದರಿಂದ ಭೂಮಿಗೆ ಸಮುದ್ರವೇ ಬಟ್ಟೆಯಂತಿದೆ.
ಇನ್ನು, ಬೆಟ್ಟ, ಗುಡ್ಡ, ಪರ್ವತಗಳೇ ಭೂದೇವತೆಗೆ ಸ್ತನದ ಮಂಡಲ ದಂತಿರುತ್ತವೆ. ಎತ್ತರವಾಗಿದ್ದು, ಉಬ್ಬಿಕೊಂಡಿರುವ ಪರ್ವತಗಳೇ ಭೂದೇವಿಗೆ ಸ್ತನಮಂಡಲಗಳೋ ಎನ್ನುವಂತೆ ತೋರುತ್ತಿವೆ. ಈ ಭೂದೇವಿಗೆ ಮಹಾವಿಷ್ಣುವೇ ಪತಿಯಾಗಿರುತ್ತಾನೆ. ಅಂದರೆ ಇಡೀ ಭೂಮಂಡಲವನ್ನು ಕಾಪಾಡುತ್ತಿರುವವನು ಮಹಾವಿಷ್ಣುವೇ ಅಲ್ಲವೇ? ಅಮ್ಮ, ಭೂದೇವಿಯೇ ನಿನಗೆ ನಮಸ್ಕಾರ.
ನೀನು ತಾಯಿ, ನಾನು ಮಗ, ತಾಯಿಯನ್ನು ಭಕ್ತಿಗೌರವಗಳಿಂದ ಮಕ್ಕಳು ವಂದಿಸಬೇಕು, ಪೂಜಿಸಬೇಕು, ಸ್ತುತಿಸಬೇಕು. ಆದರೆ ಅಮ್ಮ, ನಾನು ನಿನ್ನನ್ನು ನನ್ನ ಕಾಲುಗಳಿಂದ ತುಳಿಯುತ್ತಿದ್ದೇನಮ್ಮಾ, ಇದನ್ನು ಕ್ಷಮಿಸು. ನನ್ನ ಈ ಅಪರಾಧವನ್ನು ಮನ್ನಿಸಿ, ನನ್ನನ್ನು ಕ್ಷಮಿಸಮ್ಮಾ, ತಾಯಿ! ಹೀಗೆ ಭೂಮಾತೆಯನ್ನು ಸ್ತುತಿಸುವುದರಿಂದ ನಮ್ಮ ಪಾಪಗಳೆಲ್ಲವೂ ನಾಶವಾಗುತ್ತವೆ. 'ಮಾತೃದೇವೋ ಭವ' ಎಂದು ವೇದವೇ ಹೇಳುತ್ತಿದೆ. ಮಾತೃವಂದನೆಯಿಂದ, ಮಾತೃಸ್ತುತಿಯಿಂದ ನಮಗೆ ಸಕಲ ದೇವತೆಗಳ ಅನುಗ್ರಹವೂ ದೊರಕುತ್ತದೆ.
ಬೆಳಗ್ಗೆ ಎದ್ದಕೂಡಲೇ ಈ ಸ್ತೋತ್ರವನ್ನು ಪಠಿಸಬೇಕು
Видео ಮಕ್ಕಳು ಕಲಿಯಲೇ ಬೇಕಾದ "ಭೂಮಿಕ್ಷಮಾಪಣ ಸ್ತೋತ್ರ"🙏🙏🙏🙏 канала CHETHANA K
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ ।
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ॥
ಈಗ ಇದರ ಅರ್ಥ ವನ್ನು ತಿಳಿಯೋಣ
: ಭೂದೇವಿಯನ್ನು ಇಲ್ಲಿ ಸುಂದರವಾಗಿ ಸ್ತುತಿಸಿದೆ:
ಸಮುದ್ರವಸನೇ ದೇವಿ: ಅಂದರೆ ಸಮುದ್ರವನ್ನೇ ವಸ್ತ್ರವನ್ನಾಗಿ ಉಳ್ಳಂಥ ಭೂದೇವಿಯೇ; ಭೂಮಿಯು ವಿಸ್ತಾರವಾಗಿ ಹರಡಿಕೊಂಡಿರುತ್ತದೆ. ಭೂದೇವಿ ಯನ್ನು ಮಹಾಲಕ್ಷ್ಮಿ ಎಂದು ಭಾವಿಸಬೇಕು. ಹೆಣ್ಣು ಎಂದಾದ ಮೇಲೆ ಉಡಲು ಬಟ್ಟೆ ಬೇಕಲ್ಲವೇ? ಇಡೀ ಭೂಮಂಡಲವೆಂಬ ದೇವಿಗೆ ಬೇಕಾಗುವ ಬಟ್ಟೆಯು ಅತ್ಯಂತ ಅಗಲವಾಗಿ, ದೊಡ್ಡದಾಗಿರಬೇಕಲ್ಲವೇ? ಹೀಗಾಗಿ ಸಮುದ್ರವೇ ಭೂದೇವಿಗೆ ಬಟ್ಟೆಯಂತಿರುತ್ತದೆ. ಭೂಮಂಡಲವನ್ನು ವಿಶಾಲವಾದ ಸಮುದ್ರವು ಆವರಿಸಿರುತ್ತದೆ. ಆದ್ದರಿಂದ ಭೂಮಿಗೆ ಸಮುದ್ರವೇ ಬಟ್ಟೆಯಂತಿದೆ.
ಇನ್ನು, ಬೆಟ್ಟ, ಗುಡ್ಡ, ಪರ್ವತಗಳೇ ಭೂದೇವತೆಗೆ ಸ್ತನದ ಮಂಡಲ ದಂತಿರುತ್ತವೆ. ಎತ್ತರವಾಗಿದ್ದು, ಉಬ್ಬಿಕೊಂಡಿರುವ ಪರ್ವತಗಳೇ ಭೂದೇವಿಗೆ ಸ್ತನಮಂಡಲಗಳೋ ಎನ್ನುವಂತೆ ತೋರುತ್ತಿವೆ. ಈ ಭೂದೇವಿಗೆ ಮಹಾವಿಷ್ಣುವೇ ಪತಿಯಾಗಿರುತ್ತಾನೆ. ಅಂದರೆ ಇಡೀ ಭೂಮಂಡಲವನ್ನು ಕಾಪಾಡುತ್ತಿರುವವನು ಮಹಾವಿಷ್ಣುವೇ ಅಲ್ಲವೇ? ಅಮ್ಮ, ಭೂದೇವಿಯೇ ನಿನಗೆ ನಮಸ್ಕಾರ.
ನೀನು ತಾಯಿ, ನಾನು ಮಗ, ತಾಯಿಯನ್ನು ಭಕ್ತಿಗೌರವಗಳಿಂದ ಮಕ್ಕಳು ವಂದಿಸಬೇಕು, ಪೂಜಿಸಬೇಕು, ಸ್ತುತಿಸಬೇಕು. ಆದರೆ ಅಮ್ಮ, ನಾನು ನಿನ್ನನ್ನು ನನ್ನ ಕಾಲುಗಳಿಂದ ತುಳಿಯುತ್ತಿದ್ದೇನಮ್ಮಾ, ಇದನ್ನು ಕ್ಷಮಿಸು. ನನ್ನ ಈ ಅಪರಾಧವನ್ನು ಮನ್ನಿಸಿ, ನನ್ನನ್ನು ಕ್ಷಮಿಸಮ್ಮಾ, ತಾಯಿ! ಹೀಗೆ ಭೂಮಾತೆಯನ್ನು ಸ್ತುತಿಸುವುದರಿಂದ ನಮ್ಮ ಪಾಪಗಳೆಲ್ಲವೂ ನಾಶವಾಗುತ್ತವೆ. 'ಮಾತೃದೇವೋ ಭವ' ಎಂದು ವೇದವೇ ಹೇಳುತ್ತಿದೆ. ಮಾತೃವಂದನೆಯಿಂದ, ಮಾತೃಸ್ತುತಿಯಿಂದ ನಮಗೆ ಸಕಲ ದೇವತೆಗಳ ಅನುಗ್ರಹವೂ ದೊರಕುತ್ತದೆ.
ಬೆಳಗ್ಗೆ ಎದ್ದಕೂಡಲೇ ಈ ಸ್ತೋತ್ರವನ್ನು ಪಠಿಸಬೇಕು
Видео ಮಕ್ಕಳು ಕಲಿಯಲೇ ಬೇಕಾದ "ಭೂಮಿಕ್ಷಮಾಪಣ ಸ್ತೋತ್ರ"🙏🙏🙏🙏 канала CHETHANA K
Показать
Комментарии отсутствуют
Информация о видео
Другие видео канала
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು- ಡಿ.ವಿ.ಜಿ ಯುಗಾದಿ ಹಬ್ಬದ ಶುಭಾಶಯಗಳು💐🙏ಶತ ಶತಮಾನದ ನಾಡುrama mantrava japiso manuja.......ಹುಟ್ಟುಹಬ್ಬದ ಶುಭಾಶಯಗಳು "ಚಿನ್ನಿ" ಈ ನಗು ಸದಾ ಇರಲಿಜನ್ಮದಿನಮಿದಂ ಅಯಿ ಪ್ರಿಯ ಸಖೇ ಶಂತನೋತು ತೇ ಸರ್ವದಾ ಮುದಂ||"ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಸೂರ್ಯನಾರಾಯಣ ಸ್ತೋತ್ರ"🙏🙏"ಸಂಕಟ ಬಂದಾಗ ವೆಂಕಟರಮಣ "Shiva Manasa Pooja -Kannada"ನಿಮ್ಮ ಕನಸಿನಂತೆ ನಿಮ್ಮ ಮಗು"talented kid chinmaya says benaka benaka ekadanta sloka.UKG ಮಗು ಗಣಪನನ್ನು ಎಷ್ಟು ಚೆಂದಾಗಿ ಭಜಿಸಿದೆ ನೋಡಿ.ಕರಾವಳಿ ಹಾಗೂ ಮಲೆನಾಡಿನ ಸ್ಪೆಷಲ್ ಬದನೆಕಾಯಿ ಹಸಿ ಮಾಡುವ ವಿಧಾನ.ಚೇತನ ಚಾನೆಲ್ ವೀಕ್ಷರಿಗೆ ಯುಗಾದಿ ಹಬ್ಬದ ಶುಭಾಶಯಗಳು 💐💐"ಕಿತ್ತೂರಿನ ರಾಣಿ ಚೆನ್ನಮ್ಮಳ ಪಾತ್ರ ಅಭಿನಯ"(kittur chennamma)ಎದ್ದು ಬಾರೋ ಬೇಗ ಶುದ್ಧ ಮನದಲಿ ಕರೆವೆ ಇದ್ದು ಜೊತೆಗೆಮ್ಮ ಸಲಹೊ ಗುರುರಾಯ🙏🙏ಬದುಕಿನಲ್ಲಿ ನಮ್ಮಿಂದ ಕಸಿದುಕೊಳ್ಳಲಾಗದು ವಸ್ತು ಯಾವುದು? thing which cannot be taken from our life?ನೀವು ಕೂಡ ನಿಮ್ಮಆಲೋಚನೆಗಳನ್ನು ಏಕೆ "ಫ್ರೆಶ್ "ಆಗಿ ಮಾರ್ಪಾಟು ಮಾಡಿಕೊಳ್ಳಬಾರದು?ಯಾರೇ ರಂಗನ... ಯಾರೇ ಕೃಷ್ಣನ... ###🙏🙏🙏🙏Shree Guru Astakma..... 🙏🙏🙏🙏"ಬೆಳಿಗ್ಗೆ ನೀರು,ಊಟದ ಕೊನೆಗೆ ಮಜ್ಜಿಗೆ ಮತ್ತು ಸಾಯಂಕಾಲ ಹಾಲು ಕುಡಿಯುವುದರ ಆಧ್ಯಾತ್ಮಿಕ ಮಹತ್ವ"ಮಕ್ಕಳಿಗಾಗಿ ಸ್ತೋತ್ರ ಗಳು#1. ಅರ್ಥ ಸಮೇತ ಗಣಪತಿಯ ಪ್ರಸಿದ್ಧ ವಾದ ಸ್ತೋತ್ರ. ##🙏🙏makkaligagi stotragalu........