28 July 2020
ಓತಿಕೇತದ ಬಾಣಂತನ
ಇಂದು ನಾನು ಹಾಡಿಯಲ್ಲಿ ಅಲೆದಾಡುತ್ತಿರುವಾಗ ಒಂದು ಓತಿಕೇತ (ನಮ್ಮ ಭಾಷೆಯಲ್ಲಿ ಕಾಯಿಕಳ್ಳ) ನೆಲದಲ್ಲಿ ಗುಣಿ ತೋಡುತ್ತಿತ್ತು. ನೋಡುನೋಡುತ್ತಿರುವಂತೆ ಎರಡಿಂಚು ವ್ಯಾಸದ ಮೂರು ನಾಲ್ಕಿಂಚು ಆಳದ ಗುಣಿ ತೋಡಿತು. ಅದರ ತರಾತುರಿ ಗಮನಿಸಿ ಹಾಗೆಯೇ ನೋಡುತ್ತ ನಿಂತೆ. ತೋಡುವುದನ್ನು ನಿಲ್ಲಿಸಿ ಗುಣಿಗೆ ಅಡ್ಡಲಾಗಿ ನಿಂತು (ಕುಳಿತು) ಧ್ಯಾನಸ್ಥ ಸ್ಥಿತಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿದ್ದರೂ ಅದರ ಹೊಟ್ಟೆಯ ಭಾಗದಲ್ಲಿ ಏನೋ ಚಲನೆ ಕಾಣಿಸಿತು. ನಾನು ನೋಡುತ್ತಿರುವಂತೆ ಗಜ್ಜುಗ ಗಾತ್ರದ ನಾಲ್ಕಾರು ಬೆಳ್ಳಂಬಿಳಿ ಮೊಟ್ಟೆಗಳನ್ನು ಗುಣಿಯಲ್ಲಿ ಉದುರಿಸಿತು. ನಂತರ ತಾನೇ ಗುಣಿಯಿಂದ ಮೇಲೆ ಎತ್ತಿದ್ದ ಮಣ್ಣನ್ನು ಕಾಲುಗಳಿಂದ ಕೆರೆದು ಗುಣಿಯೊಳಕ್ಕೆ ಬಾಚತೊಡಗಿತು. ಮೊಟ್ಟೆಗಳು ಉರುಳಾಡದಂತೆ ಅವುಗಳ ನಡುವೆ ಮಣ್ಣನ್ನು ಪ್ಯಾಕ್ ಮಾಡಿ ನಂತರ ಮೊದಲಿನ ರೀತಿಯಲ್ಲಿಯೇ ಗುಣಿಗೆ ಅಡ್ಡಲಾಗಿ ನಿಂತು ಇನ್ನಷ್ಟು ಮೊಟ್ಟೆಗಳನ್ನು ಉದುರಿಸಿತು.
ಈ ಅಪರೂಪದ ದೃಶ್ಯವನ್ನು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿಯುವ ಇರಾದೆಯಿಂದ ಮನೆಯೊಳಕ್ಕೆ ಹೋಗಿ ಹೊರಗೆ ಬರುವಷ್ಟರಲ್ಲಿ ಓತಿಕೇತ ಮೊಟ್ಟೆ ಇಡುವುದನ್ನು ಮುಗಿಸಿ ತನ್ನ ಮೂತಿಯಿಂದ ಅವುಗಳನ್ನು ತಿವಿಯುತ್ತ ಪ್ಯಾಕ್ ಮಾಡುತ್ತಿತ್ತು. ನಂತರ ತನ್ನ ಕಾಲುಗಳಿಂದ ಬರಬರನೆ ಮಣ್ಣು ಕೆರೆದು ಮೊಟ್ಟೆಗಳನ್ನು ಸಂಪೂರ್ಣವಾಗಿ ಮುಚ್ಚತೊಡಗಿತು. ಗುಣಿಯನ್ನು ಮುಚ್ಚಿದ ನಂತರ ನೋಡಿದರೆ ಅಲ್ಲಿ ಗುಣಿ ತೋಡಿದ್ದ, ಮೊಟ್ಟೆ ಹೂತಿದ್ದ ಕುರುಹನ್ನು ಸಹ ಉಳಿಸಿರಲಿಲ್ಲ.
ಇವೆಲ್ಲವನ್ನೂ ಕೇವಲ ಮಾರು ದೂರದಿಂದ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರೂ ನನ್ನನ್ನು ಓತಿಕೇತ ಸಂಪೂರ್ಣ ನಿರ್ಲಕ್ಷಿಸಿತ್ತು. ಅಥವ ನಾನು ಓತಿಕೇತಕ್ಕೂ ಭಯವಿಲ್ಲದಷ್ಟು ನಿರುಪದ್ರವಿಯಾಗಿ ಬಿಟ್ಟೆನೆ? ಕಾಲ ಬುಡದ ದರಲೆ ಸರಿದು ಶಬ್ದವಾದಾಗಲೂ ಓತಿಕೇತ ನನ್ನನ್ನು ದುರುಗುಟ್ಟಿ ನೋಡಿತೇ ಹೊರತು ಗುಣಿಯನ್ನು ಬಿಟ್ಟು ಸರಿಯಲಿಲ್ಲ.
ನನಗೆ ಇದೊಂದು ಹೊಸ ಅನುಭವ; ಹೊಸ ಪಾಠ! ಮಾನವರಲ್ಲಿ ರೆಡಿಮೇಡ್ ಮಗು ಜನಿಸುತ್ತದೆ. ಜೀವನದ ಕೊನೆಯಲ್ಲಿ ಗುಣಿಯೊಳಗೆ ಮಲಗುತ್ತದೆ. ಓತಿಕೇತದ ವಿಷಯದಲ್ಲಿ ಹಾಗಲ್ಲ. ಮಣ್ಣಿನೊಳಗೆ ಹೂತಿಟ್ಟ ಮೊಟ್ಟೆಗಳ ಗಡಸು ಕವಚವನ್ನು ಸೀಳಿ ಮಣ್ಣಿನೊಳಗಿಂದ ಎದ್ದು ಬರಬೇಕು, ಓತಿಕೇತದ ಮರಿಗಳು. ಮಾನವ ಹುಟ್ಟಿನಿಂದಲೇ ಪರಾವಲಂಬಿ. ಬಾಕಿಯುಳಿದ ಜೀವ ಜಗತ್ತು ಹುಟ್ಟಿನಿಂದ ಸಾಯುವ ತನಕ ಆತ್ಮನಿರ್ಭರ.
ಮಾನವ ತನ್ನ ಕಷ್ಟವನ್ನು ಎಲ್ಲರೂ ಹಂಚಿಕೊಳ್ಳಲಿ ಎಂದು ಬಯಸುತ್ತಾನೆ. ಆದರೆ ಈ ಕ್ಷುದ್ರ ಓತಿಕೇತ ತನಗೆ ಬಸಿರು ಮಾಡಿದ ಗಂಡನ್ನು ಮರೆತೇ ಬಿಟ್ಟಿತ್ತು. ಸಂತತಿಯನ್ನು ಮುಂದುವರೆಸುವುದು ತನ್ನ ಕರ್ತವ್ಯವೆಂಬಂತೆ ಹೆರಿಗೆಯ ಸಂಪೂರ್ಣ ವ್ಯವಸ್ಥೆಯನ್ನು ತಾನೇ ಮಾಡಿಕೊಂಡಿತ್ತು. ತನ್ನ ಬಾಣಂತನವನ್ನೂ ತಾನೇ ಮಾಡಿಕೊಂಡಿತ್ತು.
ಓ ದೇವರೇ, ಕಳೆದ ಕೆಲವು ವರ್ಷಗಳಿಂದ ನಮ್ಮ ಊರಿಗೆ ಆಗಂತುಕವಾಗಿರುವ ನವಿಲುಗಳು ಈ ಮೊಟ್ಟೆಗಳನ್ನು ತಿನ್ನದಿರಲಿ. ನಮ್ಮ ಹಾರೆಗಳ ಹೊಡೆತಕ್ಕೆ ಮೊಟ್ಟೆಗಳು ಸಿಕ್ಕದಿರಲಿ, ನಮ್ಮ ಪದಾಘಾತಕ್ಕೆ ಅವು ಪುಡಿಯಾಗದಿರಲಿ.
ಕೊನೆಗೆ ನನಗನ್ನಿಸಿದ್ದಿಷ್ಟೇ: ಅತ್ಯಂತ ಪರಾವಲಂಬಿಯಾಗಿದ್ದರೂ ಮಾನವನ ಅಹಂಕಾರಕ್ಕೆ ಎಣೆಯೇ ಇಲ್ಲ.
ಕೆ. ಜನಾರ್ದನ ತುಂಗ
Видео 28 July 2020 канала k. Janardhana Thunga
ಇಂದು ನಾನು ಹಾಡಿಯಲ್ಲಿ ಅಲೆದಾಡುತ್ತಿರುವಾಗ ಒಂದು ಓತಿಕೇತ (ನಮ್ಮ ಭಾಷೆಯಲ್ಲಿ ಕಾಯಿಕಳ್ಳ) ನೆಲದಲ್ಲಿ ಗುಣಿ ತೋಡುತ್ತಿತ್ತು. ನೋಡುನೋಡುತ್ತಿರುವಂತೆ ಎರಡಿಂಚು ವ್ಯಾಸದ ಮೂರು ನಾಲ್ಕಿಂಚು ಆಳದ ಗುಣಿ ತೋಡಿತು. ಅದರ ತರಾತುರಿ ಗಮನಿಸಿ ಹಾಗೆಯೇ ನೋಡುತ್ತ ನಿಂತೆ. ತೋಡುವುದನ್ನು ನಿಲ್ಲಿಸಿ ಗುಣಿಗೆ ಅಡ್ಡಲಾಗಿ ನಿಂತು (ಕುಳಿತು) ಧ್ಯಾನಸ್ಥ ಸ್ಥಿತಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿದ್ದರೂ ಅದರ ಹೊಟ್ಟೆಯ ಭಾಗದಲ್ಲಿ ಏನೋ ಚಲನೆ ಕಾಣಿಸಿತು. ನಾನು ನೋಡುತ್ತಿರುವಂತೆ ಗಜ್ಜುಗ ಗಾತ್ರದ ನಾಲ್ಕಾರು ಬೆಳ್ಳಂಬಿಳಿ ಮೊಟ್ಟೆಗಳನ್ನು ಗುಣಿಯಲ್ಲಿ ಉದುರಿಸಿತು. ನಂತರ ತಾನೇ ಗುಣಿಯಿಂದ ಮೇಲೆ ಎತ್ತಿದ್ದ ಮಣ್ಣನ್ನು ಕಾಲುಗಳಿಂದ ಕೆರೆದು ಗುಣಿಯೊಳಕ್ಕೆ ಬಾಚತೊಡಗಿತು. ಮೊಟ್ಟೆಗಳು ಉರುಳಾಡದಂತೆ ಅವುಗಳ ನಡುವೆ ಮಣ್ಣನ್ನು ಪ್ಯಾಕ್ ಮಾಡಿ ನಂತರ ಮೊದಲಿನ ರೀತಿಯಲ್ಲಿಯೇ ಗುಣಿಗೆ ಅಡ್ಡಲಾಗಿ ನಿಂತು ಇನ್ನಷ್ಟು ಮೊಟ್ಟೆಗಳನ್ನು ಉದುರಿಸಿತು.
ಈ ಅಪರೂಪದ ದೃಶ್ಯವನ್ನು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿಯುವ ಇರಾದೆಯಿಂದ ಮನೆಯೊಳಕ್ಕೆ ಹೋಗಿ ಹೊರಗೆ ಬರುವಷ್ಟರಲ್ಲಿ ಓತಿಕೇತ ಮೊಟ್ಟೆ ಇಡುವುದನ್ನು ಮುಗಿಸಿ ತನ್ನ ಮೂತಿಯಿಂದ ಅವುಗಳನ್ನು ತಿವಿಯುತ್ತ ಪ್ಯಾಕ್ ಮಾಡುತ್ತಿತ್ತು. ನಂತರ ತನ್ನ ಕಾಲುಗಳಿಂದ ಬರಬರನೆ ಮಣ್ಣು ಕೆರೆದು ಮೊಟ್ಟೆಗಳನ್ನು ಸಂಪೂರ್ಣವಾಗಿ ಮುಚ್ಚತೊಡಗಿತು. ಗುಣಿಯನ್ನು ಮುಚ್ಚಿದ ನಂತರ ನೋಡಿದರೆ ಅಲ್ಲಿ ಗುಣಿ ತೋಡಿದ್ದ, ಮೊಟ್ಟೆ ಹೂತಿದ್ದ ಕುರುಹನ್ನು ಸಹ ಉಳಿಸಿರಲಿಲ್ಲ.
ಇವೆಲ್ಲವನ್ನೂ ಕೇವಲ ಮಾರು ದೂರದಿಂದ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರೂ ನನ್ನನ್ನು ಓತಿಕೇತ ಸಂಪೂರ್ಣ ನಿರ್ಲಕ್ಷಿಸಿತ್ತು. ಅಥವ ನಾನು ಓತಿಕೇತಕ್ಕೂ ಭಯವಿಲ್ಲದಷ್ಟು ನಿರುಪದ್ರವಿಯಾಗಿ ಬಿಟ್ಟೆನೆ? ಕಾಲ ಬುಡದ ದರಲೆ ಸರಿದು ಶಬ್ದವಾದಾಗಲೂ ಓತಿಕೇತ ನನ್ನನ್ನು ದುರುಗುಟ್ಟಿ ನೋಡಿತೇ ಹೊರತು ಗುಣಿಯನ್ನು ಬಿಟ್ಟು ಸರಿಯಲಿಲ್ಲ.
ನನಗೆ ಇದೊಂದು ಹೊಸ ಅನುಭವ; ಹೊಸ ಪಾಠ! ಮಾನವರಲ್ಲಿ ರೆಡಿಮೇಡ್ ಮಗು ಜನಿಸುತ್ತದೆ. ಜೀವನದ ಕೊನೆಯಲ್ಲಿ ಗುಣಿಯೊಳಗೆ ಮಲಗುತ್ತದೆ. ಓತಿಕೇತದ ವಿಷಯದಲ್ಲಿ ಹಾಗಲ್ಲ. ಮಣ್ಣಿನೊಳಗೆ ಹೂತಿಟ್ಟ ಮೊಟ್ಟೆಗಳ ಗಡಸು ಕವಚವನ್ನು ಸೀಳಿ ಮಣ್ಣಿನೊಳಗಿಂದ ಎದ್ದು ಬರಬೇಕು, ಓತಿಕೇತದ ಮರಿಗಳು. ಮಾನವ ಹುಟ್ಟಿನಿಂದಲೇ ಪರಾವಲಂಬಿ. ಬಾಕಿಯುಳಿದ ಜೀವ ಜಗತ್ತು ಹುಟ್ಟಿನಿಂದ ಸಾಯುವ ತನಕ ಆತ್ಮನಿರ್ಭರ.
ಮಾನವ ತನ್ನ ಕಷ್ಟವನ್ನು ಎಲ್ಲರೂ ಹಂಚಿಕೊಳ್ಳಲಿ ಎಂದು ಬಯಸುತ್ತಾನೆ. ಆದರೆ ಈ ಕ್ಷುದ್ರ ಓತಿಕೇತ ತನಗೆ ಬಸಿರು ಮಾಡಿದ ಗಂಡನ್ನು ಮರೆತೇ ಬಿಟ್ಟಿತ್ತು. ಸಂತತಿಯನ್ನು ಮುಂದುವರೆಸುವುದು ತನ್ನ ಕರ್ತವ್ಯವೆಂಬಂತೆ ಹೆರಿಗೆಯ ಸಂಪೂರ್ಣ ವ್ಯವಸ್ಥೆಯನ್ನು ತಾನೇ ಮಾಡಿಕೊಂಡಿತ್ತು. ತನ್ನ ಬಾಣಂತನವನ್ನೂ ತಾನೇ ಮಾಡಿಕೊಂಡಿತ್ತು.
ಓ ದೇವರೇ, ಕಳೆದ ಕೆಲವು ವರ್ಷಗಳಿಂದ ನಮ್ಮ ಊರಿಗೆ ಆಗಂತುಕವಾಗಿರುವ ನವಿಲುಗಳು ಈ ಮೊಟ್ಟೆಗಳನ್ನು ತಿನ್ನದಿರಲಿ. ನಮ್ಮ ಹಾರೆಗಳ ಹೊಡೆತಕ್ಕೆ ಮೊಟ್ಟೆಗಳು ಸಿಕ್ಕದಿರಲಿ, ನಮ್ಮ ಪದಾಘಾತಕ್ಕೆ ಅವು ಪುಡಿಯಾಗದಿರಲಿ.
ಕೊನೆಗೆ ನನಗನ್ನಿಸಿದ್ದಿಷ್ಟೇ: ಅತ್ಯಂತ ಪರಾವಲಂಬಿಯಾಗಿದ್ದರೂ ಮಾನವನ ಅಹಂಕಾರಕ್ಕೆ ಎಣೆಯೇ ಇಲ್ಲ.
ಕೆ. ಜನಾರ್ದನ ತುಂಗ
Видео 28 July 2020 канала k. Janardhana Thunga
Показать
Комментарии отсутствуют
Информация о видео
Другие видео канала
Dr Hemalatha Jain: On her story - 3ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿವಸ ಬ್ಯಾಂಕ್ ಆಫ್ ಬರೋಡ ಎಂಪ್ಲಾಯೀಸ್ ಸಂಘದಲ್ಲಿ ಮಾಡಿದ ಭಾಷಣನಿತ್ಯ ಅನ್ನದಾನ ಅದಮ್ಯಚೇತನ ಸಂಸ್ಥೆಯ ಒಂದು ಅಪ್ರತಿಮ ಸೇವಾಕಾರ್ಯ.Nandi at Basaveswara Temple at Anekonda near DavanagereBhasmasura by Ganapthi Hegade, Thotimane at kumtaNamakarana of baby Deeksha Thungaಮಹಾಮಸ್ತಕಾಭಿಷೇಕ2018ಅನಂತಕುಮಾರರ ಸ್ಮರಣೆಯಲ್ಲಿ ಪಂಜಿನ ಮೆರವಣಿಗೆ, ೧೨/೧೧/೨೦೨೧ಸಾಲಿಗ್ರಾಮ ರಥೋತ್ಸವDance performance by Sahana Bharadwaj at Kumta0835DE6E 63F0 4AF5 B8A3 2F087C6C5C20ಕೋಟ-ಪಡುಕೆರೆ ಬೀಚಿನಲ್ಲಿ ಸೆಲ್ಫೀ ನಡಿಗೆ Walking along Kota beachMelodious prayer by Smt Vinutha Paniyadi568FD49C C487 4E7F 94C4 1B82805CE38AMy speech during felicitation of Sri Ganesh Kamath - First partAJJA, a poem by Dr Govinga Hegde, recited and explained by meಶ್ರೀ ಎನ್ ಎಸ್ ಶ್ರೀನಿವಾಸ ಮೂರ್ತಿಯವರು ಬರೆದ ಶಿಲ್ಪಕಲಾ ದೇವಾಲಯಗಳ ದಾರಿ ಪುಸ್ತಕದ ಪರಿಚಯBank of Baroda Kannada SanghaRudrabhisheka to Prasanna Anjaneya at Talya Chitradurga distಬನವಾಸಿಯ ಮಧುಕೇಶ್ವರ ದೇವಾಲಯದ ಕಲ್ಲಿನ ಮಂಚ