ತುಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ರಕ್ತೇಶ್ವರಿ ದೈವದ ಧರ್ಮ ನಡಾವಳಿ|Raktheswari Daiva Dharma Nadavali
ರಕ್ತೇಶ್ವರಿ (ಲೆಕ್ಕೆಸಿರಿ) ಧರ್ಮ ನಡಾವಳಿ, ಉದಯಗಿರಿ-ಸಂಪ್ಯ, ಪುತ್ತೂರು "
ಸುಮಾರು 800 ವರ್ಷಗಳ ಹಿಂದೆ ಬೆಳ್ತಂಗಡಿಯ "ಅಂತರಂಗ ಬೂಡು, ದೇವರಂದ ಇಲ್ಲ್" ಎಂಬ ಮನೆಯಲ್ಲಿ 'ಉಪದೇಶಿ ಬಾಳೋಲಿ'ಗಳಿಗೆ ತನ್ನ ಕುಟುಂಬವನ್ನು ಕಾಯಲು, ಊರನ್ನು ರಕ್ಷಿಸಲು ದೈವ ಬೇಕೆಂದು ಅಪೇಕ್ಷೆಯಾಗುತ್ತದೆ. ಇವರು ಒಳ್ಳೆಯ ದಿನವನ್ನು ನೋಡಿ ವರ್ಷದಲ್ಲಿ ಒಂದು ದಿನ ಬರುವ 'ಉಬಾರ ಮಖೆಗೆ' ಹೋಗಲು ತಯಾರಿ ನಡೆಸುತ್ತಾರೆ. ದಿನ ಸಮೀಪವಾದ ಹಾಗೆ ತನ್ನ ಮನೆಯಿಂದ ಹೊರಟು ಶ್ರೀ ಕ್ಷೇತ್ರ ಉಪ್ಪಿನಂಗಡಿಗೆ ಬರುತ್ತಾರೆ. ಇದನ್ನು ತುಳುವಿನಲ್ಲಿ 'ಪೆರಿಯಳ್ಳ ಗಂಗೆ' ಎನ್ನುತ್ತಾರೆ. ಇಲ್ಲಿ ಇವರು ದೈವದ ಸೇವೆ, ದೇವರ ಸೇವೆ ನೋಡಿ ಪುಳಕಿತರಾಗಿ ಇಲ್ಲಿಯ ಕರ್ತರೊಡನೆ ತನಗಾಗುವ ದೈವ ಬೇಕೆಂದು ಕೇಳಿಕೊಂಡಾಗ ಕರ್ತವರು ಹೊಸ ದಲ್ಯದಲ್ಲಿ, ಇಡಿ ಹಿಂಗಾರದ ಹಾಳೆಯಲ್ಲಿ ದೈವವನ್ನು ಜಪಿಸಿ ಕೊಡುತ್ತಾರೆ. ಆ ದೈವವೇ ಭೂಮಿ ತೂಕದ ಕನ್ಯಾವು ಲೆಕ್ಕೆಸಿರಿ (ರಕ್ತೇಶ್ವರಿ). ಹೀಗೆ ಇವರೊಡನೆ ದೈವ ಇವರ ಮನೆಗೆ ಬರುತ್ತದೆ. ಇವರು ಭಕ್ತಿಯಿಂದ ನಂಬುತ್ತಿದ್ದ ಹಾಗೆ ದೈವದ ಸಾನಿಧ್ಯ ಹೆಚ್ಚುತ್ತಾ ಹೋಗುತ್ತದೆ. ಕಾಲಾ ನಂತರದಲ್ಲಿ ಇವರ ದಿನ ಕಳೆದು ಇವರ ಪೀಳಿಗೆಯಲ್ಲಿ ಹುಟ್ಟಿದ ಶಂಕರ ಸೇನವರೆಂಬವರ ಮಗ ಬಾನು ಸೇನವರಿಗೆ ಈ ಸತ್ಯದ ಶಕ್ತಿಗೆ ನೇಮ ಕೊಡಬೆಂದು ಮನಸಾಗುತ್ತದೆ. ಹೀಗೆ ಇವರು ವೀಳ್ಯದೆಲೆಯ 16 ಬಾಗಿಲಿರುವ ಚಪ್ಪರ ಹಾಕಿಸಿ, ಕಬ್ಬಿನ ಅಡ್ಡ ಸಿಕ್ಕಿಸಿ 16 ಬಾಗಿಲಿನಲ್ಲಿ 16 ಬಗೆಯ ವಸ್ತುಗಳನ್ನು ಇರಿಸಿ, ಬೆಲ್ಲದ ಒಲೆಗೆ ಗಂಧದ ಕಟ್ಟಿಗೆ, 16 ಮುಡಿ ಅಕ್ಕಿಯ ಚರ್ವ, 16 ಗಂಟು ಬಿದಿರಿನ ಸಿರಿಮುಡಿ ಕಟ್ಟಿಸಿ ಶ್ರೀ ದೈವವನ್ನು ಒಲಿಸಲು ಮಾಡಿದ ಮಹಾ ಸೇವೆಯೇ ಈ "ಧರ್ಮ ನಡಾವಳಿ". ಸಾವಿರ ಬೊoಡ, ಸಾವಿರ ಸೇರು ಹೊದಲು, ಸಾವಿರ ಬಾಳೆಹಣ್ಣು, ಸಾವಿರ ಕೊಡಪಾನ ಕುರುದಿ ಮೂಲಕ ಆ ಕಾಲದಲ್ಲಿ ಬಾನು ಸೇನವರು ಶ್ರೀ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಇಡೀ ರಾತ್ರಿ ಈ ಸೇವೆಯನ್ನು ನಡೆಸಿದಾಗ ದೈವವು ಭೂಮಿಯಿಂದ ಆಕಾಶಕ್ಕೆ, ಆಕಾಶದಿಂದ ಭೂಮಿಗೆ ಸಂತಸದಿಂದ ಕುಣಿಯಿತೆಂಬ ಇತಿಹಾಸವಿದೆ. ಈ ಮಹಾಸೇವೆಯಿಂದ ಬಾನು ಸೇನಾವರ ಕುಟುಂಬ ಮತ್ತು ಇಡೀ ಊರೇ ಉದ್ದಾರವಾಗಿತ್ತಂತೆ. ಆದರೆ ಮತ್ತೆ ಇಂತಹ ಸೇವೆ ಯಾರಿಂದಲೂ ಎಲ್ಲಿಯೂ ನಡೆಸಲಾಗಲಿಲ್ಲ. ಇದಕ್ಕೆ 'ಗುರ್ಜಿ ನೇಮ' ಎಂದೂ ಹೆಸರಿದೆ. ರಾತ್ರಿ ಪ್ರಾರಂಭವಾದ ನೇಮ ನೋಡಿ ಮುಂಜಾನೆ ದೈವ ಕೊಡುವ ಸಿರಿಮುಡಿ ಗಂಧ ಬೂಳ್ಯ ಸ್ವೀಕರಿಸಿದರೆ ಜನ್ಮ ಪಾವನ ಎಂಬುದು ತುಳುವರ ನಂಬಿಕೆ.
#dharmanadavali
#raktheswari
#tulunaduculture
#daiva
#dharmadaiva
#guliggadaiva
#kantharamovies
#kola
Видео ತುಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ರಕ್ತೇಶ್ವರಿ ದೈವದ ಧರ್ಮ ನಡಾವಳಿ|Raktheswari Daiva Dharma Nadavali канала Star Of Mangalore
ಸುಮಾರು 800 ವರ್ಷಗಳ ಹಿಂದೆ ಬೆಳ್ತಂಗಡಿಯ "ಅಂತರಂಗ ಬೂಡು, ದೇವರಂದ ಇಲ್ಲ್" ಎಂಬ ಮನೆಯಲ್ಲಿ 'ಉಪದೇಶಿ ಬಾಳೋಲಿ'ಗಳಿಗೆ ತನ್ನ ಕುಟುಂಬವನ್ನು ಕಾಯಲು, ಊರನ್ನು ರಕ್ಷಿಸಲು ದೈವ ಬೇಕೆಂದು ಅಪೇಕ್ಷೆಯಾಗುತ್ತದೆ. ಇವರು ಒಳ್ಳೆಯ ದಿನವನ್ನು ನೋಡಿ ವರ್ಷದಲ್ಲಿ ಒಂದು ದಿನ ಬರುವ 'ಉಬಾರ ಮಖೆಗೆ' ಹೋಗಲು ತಯಾರಿ ನಡೆಸುತ್ತಾರೆ. ದಿನ ಸಮೀಪವಾದ ಹಾಗೆ ತನ್ನ ಮನೆಯಿಂದ ಹೊರಟು ಶ್ರೀ ಕ್ಷೇತ್ರ ಉಪ್ಪಿನಂಗಡಿಗೆ ಬರುತ್ತಾರೆ. ಇದನ್ನು ತುಳುವಿನಲ್ಲಿ 'ಪೆರಿಯಳ್ಳ ಗಂಗೆ' ಎನ್ನುತ್ತಾರೆ. ಇಲ್ಲಿ ಇವರು ದೈವದ ಸೇವೆ, ದೇವರ ಸೇವೆ ನೋಡಿ ಪುಳಕಿತರಾಗಿ ಇಲ್ಲಿಯ ಕರ್ತರೊಡನೆ ತನಗಾಗುವ ದೈವ ಬೇಕೆಂದು ಕೇಳಿಕೊಂಡಾಗ ಕರ್ತವರು ಹೊಸ ದಲ್ಯದಲ್ಲಿ, ಇಡಿ ಹಿಂಗಾರದ ಹಾಳೆಯಲ್ಲಿ ದೈವವನ್ನು ಜಪಿಸಿ ಕೊಡುತ್ತಾರೆ. ಆ ದೈವವೇ ಭೂಮಿ ತೂಕದ ಕನ್ಯಾವು ಲೆಕ್ಕೆಸಿರಿ (ರಕ್ತೇಶ್ವರಿ). ಹೀಗೆ ಇವರೊಡನೆ ದೈವ ಇವರ ಮನೆಗೆ ಬರುತ್ತದೆ. ಇವರು ಭಕ್ತಿಯಿಂದ ನಂಬುತ್ತಿದ್ದ ಹಾಗೆ ದೈವದ ಸಾನಿಧ್ಯ ಹೆಚ್ಚುತ್ತಾ ಹೋಗುತ್ತದೆ. ಕಾಲಾ ನಂತರದಲ್ಲಿ ಇವರ ದಿನ ಕಳೆದು ಇವರ ಪೀಳಿಗೆಯಲ್ಲಿ ಹುಟ್ಟಿದ ಶಂಕರ ಸೇನವರೆಂಬವರ ಮಗ ಬಾನು ಸೇನವರಿಗೆ ಈ ಸತ್ಯದ ಶಕ್ತಿಗೆ ನೇಮ ಕೊಡಬೆಂದು ಮನಸಾಗುತ್ತದೆ. ಹೀಗೆ ಇವರು ವೀಳ್ಯದೆಲೆಯ 16 ಬಾಗಿಲಿರುವ ಚಪ್ಪರ ಹಾಕಿಸಿ, ಕಬ್ಬಿನ ಅಡ್ಡ ಸಿಕ್ಕಿಸಿ 16 ಬಾಗಿಲಿನಲ್ಲಿ 16 ಬಗೆಯ ವಸ್ತುಗಳನ್ನು ಇರಿಸಿ, ಬೆಲ್ಲದ ಒಲೆಗೆ ಗಂಧದ ಕಟ್ಟಿಗೆ, 16 ಮುಡಿ ಅಕ್ಕಿಯ ಚರ್ವ, 16 ಗಂಟು ಬಿದಿರಿನ ಸಿರಿಮುಡಿ ಕಟ್ಟಿಸಿ ಶ್ರೀ ದೈವವನ್ನು ಒಲಿಸಲು ಮಾಡಿದ ಮಹಾ ಸೇವೆಯೇ ಈ "ಧರ್ಮ ನಡಾವಳಿ". ಸಾವಿರ ಬೊoಡ, ಸಾವಿರ ಸೇರು ಹೊದಲು, ಸಾವಿರ ಬಾಳೆಹಣ್ಣು, ಸಾವಿರ ಕೊಡಪಾನ ಕುರುದಿ ಮೂಲಕ ಆ ಕಾಲದಲ್ಲಿ ಬಾನು ಸೇನವರು ಶ್ರೀ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಇಡೀ ರಾತ್ರಿ ಈ ಸೇವೆಯನ್ನು ನಡೆಸಿದಾಗ ದೈವವು ಭೂಮಿಯಿಂದ ಆಕಾಶಕ್ಕೆ, ಆಕಾಶದಿಂದ ಭೂಮಿಗೆ ಸಂತಸದಿಂದ ಕುಣಿಯಿತೆಂಬ ಇತಿಹಾಸವಿದೆ. ಈ ಮಹಾಸೇವೆಯಿಂದ ಬಾನು ಸೇನಾವರ ಕುಟುಂಬ ಮತ್ತು ಇಡೀ ಊರೇ ಉದ್ದಾರವಾಗಿತ್ತಂತೆ. ಆದರೆ ಮತ್ತೆ ಇಂತಹ ಸೇವೆ ಯಾರಿಂದಲೂ ಎಲ್ಲಿಯೂ ನಡೆಸಲಾಗಲಿಲ್ಲ. ಇದಕ್ಕೆ 'ಗುರ್ಜಿ ನೇಮ' ಎಂದೂ ಹೆಸರಿದೆ. ರಾತ್ರಿ ಪ್ರಾರಂಭವಾದ ನೇಮ ನೋಡಿ ಮುಂಜಾನೆ ದೈವ ಕೊಡುವ ಸಿರಿಮುಡಿ ಗಂಧ ಬೂಳ್ಯ ಸ್ವೀಕರಿಸಿದರೆ ಜನ್ಮ ಪಾವನ ಎಂಬುದು ತುಳುವರ ನಂಬಿಕೆ.
#dharmanadavali
#raktheswari
#tulunaduculture
#daiva
#dharmadaiva
#guliggadaiva
#kantharamovies
#kola
Видео ತುಳುನಾಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ರಕ್ತೇಶ್ವರಿ ದೈವದ ಧರ್ಮ ನಡಾವಳಿ|Raktheswari Daiva Dharma Nadavali канала Star Of Mangalore
Показать
Комментарии отсутствуют
Информация о видео
Другие видео канала
Water Medicine|ಈ ಕ್ಷೇತ್ರದ ಬಾವಿ ನೀರೇ ದಿವ್ಯೌಷಧಿ|ವೈದ್ಯ ಲೋಕಕ್ಕೆ ಸವಾಲೆನಿಸಿದ ಈ ಕ್ಷೇತ್ರದ ಮಹಿಮೆ ಗೊತ್ತೇ...?ಬೋಲ್ಟ್ ದಾಖಲೆ ಉಡೀಸ್ ಮಾಡಿದ ತುಳುನಾಡ ಕಂಬಳ ವೀರ ಶ್ರೀನಿವಾಸ ಗೌಡ| Srinivas Gowda Breakes Usain Bolts Recordಫೋನಲ್ಲಿ ನೀವು ಕೇಳೋ ಕೊರೋನಾ ಜಾಗೃತಿ ಧ್ವನಿಯ ಒಡತಿ ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ಮಂಗಳೂರಿನಲ್ಲಿ ರಾಜ್ಯದ ಮೊದಲ ಸ್ಮಾರ್ಟ್, ಹೈಟೆಕ್ ಬಸ್ ಸ್ಟ್ಯಾಂಡ್|State's first smart bus stand in Mangaloreಜ್ವಾಲೆಯಾಗಿ ಶಶಿಕಾಂತ ಶೆಟ್ರ ಅದ್ಭುತವೆನಿಸುವ ಅಭಿನಯಕ್ಕೆ ತೆಂಕಿನ ಪ್ರೇಕ್ಷಕರು ಫಿದಾ|Jwalaprathapa|yakshananaಯಕ್ಷಗಾನ ಕಲಾವಿದನಿಂದ ರಂಗಸ್ಥಳದಲ್ಲಿ ಮತದಾನ ಜಾಗೃತಿಕಾವ್ಯಶ್ರೀ ಅಜೇರು ಮತ್ತು ಗಿರೀಶ್ ರೈ ಅವರ ಸ್ಮರಿಸಯ್ಯಾ ರಾಮ ಮಂತ್ರ|Smarisayya ramamanthra yakshagana song|ಪಟ್ಲರ ನೋಡಿದನು ಕಲಿ ರಕ್ತ ಬೀಜನು ಹಾಡು| Famous yakshagana artist patla Sathish shetty favorite song HDಧಗ ಧಗ ಹೊತ್ತಿ ಉರಿವ ಬೆಂಕಿಗೆ ಹಾರಿ ತನ್ನ ಕಾರ್ಣಿಕ ಶಕ್ತಿ ತೋರಿದ ಅಗ್ನಿ ಚಾಮುಂಡಿ ಗುಳಿಗ-mukambi guliga-daivaಕೊರಗಜ್ಜನಿಗೆ ಚಿನ್ನದ ಮುಟ್ಟಾಲೆ ಸಮರ್ಪಣೆ|ಕೋಮು ಸೌಹಾರ್ದಕ್ಕೆ ಸಾಕ್ಷಯಾದ ಉಳ್ಳಾಲ|ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಬ್ರಹ್ಮ ರಥೋತ್ಸವ|kateelu brahma rathostav|durgaparameshwari ammaವರ ನೋಡಿದ್ದೇನೆ,ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಪ್ರೇಮಾ|Prema begged Godರಾಮ, ರಾಮಾಯಣ ಮೀಡಿಯಾ ಮಾಸ್ಟರ್ ಖ್ಯಾತಿಯ ಎಮ್.ಎಸ್ ರಾಘವೇಂದ್ರ ಅದ್ಭುತ ಉಪನ್ಯಾಸ|Speech About Ramayana& Ramaಉಗ್ರರೊಂದಿಗೆ ಸೆಣಸಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ಪ್ರಾಂಜಲ್|ಪ್ರಾಂಜಲ್ ಕಲಿತ ಮಂಗಳೂರು ಶಾಲೆಯಲ್ಲಿ ಮಡುಗಟ್ಟಿದ ಶೋಕಮಂಗಳೂರು ಪಿಲಿನಲಿಕೆಯಲ್ಲಿ ಹುಲಿನೃತ್ಯಕ್ಕೆ ಭರ್ಜರಿ ಸ್ಟೆಪ್ ಹಾಕಿದ ರಾಜ್ ಬಿ. ಶೆಟ್ಟಿ,ರಿಷಬ್ ಶೆಟ್ಟಿಒಲಿಮದೆಯೊಳಗೆ ಬಣ್ಣ ಬಳಿದು ಜೋಗದಿಂದ ಹೊರಬರುವ ಅರಸು ಕುಂಜಿರಾಯ ದೈವದ ಆರ್ಭಟ|Arbhata of Arasu Kunjiraya Deivaವೂಂಬ್ ಜಿಹಾದ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?|Chakravarthi sulibele|womb jihadSathya Harishchandra Yakshagana Part-2 ಸುಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ಸತ್ಯ ಹರೀಶ್ಚಂದ್ರ ಭಾಗ-2ದೇವರ ಕಂಬಳ|ಸಾಂಪ್ರದಾಯಿಕ ಕಂಬಳ|Tulunadu culture|Indian cultureಮೋದಿಯಂತ ಪ್ರಧಾನಿ ದೇಶಕ್ಕೆ ದೊರೆತ್ತದ್ದು ಸುದೈವ;ಶತಮಾನದ ಸಂತ, ಸಿದ್ದೇಶ್ವರ ಸ್ವಾಮೀಜಿ ಮಾತು ವೈರಲ್