Загрузка страницы

ಇದ್ದಂಗಿದ್ರೆ ಇಟ್ಟಂಗಿದ್ರೆ ಬುದ್ನಂಗಾಯ್ತಾರಂತಪ್ಪಾ..

ಗೆಳೆಯರೇ, ಈ ಹಾಡನ್ನು ಬರೆದು ಎಂದಿನಂತೆ ವಾಟ್ಸಾಪ್ ನಲ್ಲಿ ಎಲ್ಲ ಮಿತ್ರರಲ್ಲಿ ಹಂಚಿಕೊಂಡಾಗ ಪ್ರತಿಬಾಣದಂತೆ ಕೀರ್ತಿಶೇಷರಾದ ಲ ನಾ ಶಾಸ್ತ್ರಿಗಳು ಕ್ಷಣಗಳಲ್ಲಿ ರಾಗ ಹಾಕಿ ಅತ್ಯದ್ಭುತವಾಗಿ ಹಾಡಿ ಕಳುಹಿಸಿದ್ದರು. ಇನ್ನೂ ಹತ್ತು ಸಾಲು ಸೇರಿಸಲು ಹೇಳಿದ್ದರು. ಆ ಮಹಾ ಗಾಯಕರಿಗೆ ಅವರದೇ ರಾಗಸಂಯೋಜನೆಯಲ್ಲಿ ಈ ಹಾಡನ್ನು ಅರ್ಪಣೆ ಮಾಡಲು ನಿರ್ದರಿಸಿದ ನಮ್ಮ ಈ ತಂಡ ಈ ಹಾಡನ್ನು ನಿಮ್ಮ ಮುಂದಿಟ್ಟಿದೆ. ಧನ್ಯವಾದ.

ಇದ್ದಂಗಿದ್ರೆ ಇಟ್ಟಂಗಿದ್ರೆ
ಬುದ್ನಂಗಾಯ್ತಾರಂತಪ್ಪಾ..
ಏನ್ಬೇಕಂದ್ರೂ ಏನ್ಬೇಡಂದ್ರೂ
ದುಃಖ ಬರ್ತೈತಂತಪ್ಪಾ
ಬಿದ್ದವರ್ನೆತ್ತಿ ಹೆತ್ತವ್ರ್ನ ಸಲ್ಹಿ
ಕೊಟ್ಟವ್ರ್ನ ಕೊಂಡಾಡಬೇಕಂತೆ
ಕೊಟ್ಟದ್ದ್ ಮರ್ತು ಇಟ್ವ್ರ ನೆನ್ದು
ಹಂಚ್ಕೊಂತಿಂದ್ರೆ ಬದುಕಂತೆ
ಬಂದದ್ ಬರ್ಲಿ ಹೋದದ್ ಹೋಗ್ಲೀ
ಬೆಳದದ್ ತಿನ್ನೋನೇ ರೈತ
ಅಪ್ಮಾನಾ ಬಿಚ್ಕೊಂಡ್ ಮಾನಾ ಮುಚ್ಕೊಂಡ್
ಸಮ್ಮಾನ ಒದ್ದೋನೇ ಸಂತ
ಅಳ್ತಾ ಉಟ್ಬುಟ್ ಆಳ್ತಾ ಬದ್ಕಿ
ನಗ್ತಾ ಸಾಯೋನೇ ವೀರ
ದೇಹಾನ್ಬೆಳ್ಸಿ ದೇಶಾನ್ಕಟ್ಟಿ
ದೇವನೂರ್ಗೋದೋನೇ ಧೀರ
ಮುನ್ಸಿಲ್ದೋನು ಮನ್ಸ್ ಹಿಡ್ಕೊಂಡು
ಗರ್ಬಿಟ್ಟೋನೇ ಗುರು ಕಣೋ
ಮಣ್ಣಲ್ಚಿನ್ನ ಹೊನ್ನಲ್ಮಣ್ಣ
ಕಂಡಂತ ಕಣ್ಣೆ ಚೆನ್ನ ಕಣೋ
ಚಿಣ್ಣರೊಡ್ನಾಡಿ ನೊಂದವ್ರಕೂಡಿ
ಗಡಿಯಲ್ಮಡಿದವ್ರ ಕೊಂಡಾಡಿ
ದಿಟಗಳ್ನುಡಿದು ನುಡಿದಂಗ್ನಡೆದು
ಅಡಿಕಿತ್ತಡಿಯಿಡುವಡಿಗೆನ್ನಮುಡಿ.
: ಅಹೋರಾತ್ರ

Видео ಇದ್ದಂಗಿದ್ರೆ ಇಟ್ಟಂಗಿದ್ರೆ ಬುದ್ನಂಗಾಯ್ತಾರಂತಪ್ಪಾ.. канала Ahoratra ಅಹೋರಾತ್ರ
Показать
Комментарии отсутствуют
Введите заголовок:

Введите адрес ссылки:

Введите адрес видео с YouTube:

Зарегистрируйтесь или войдите с
Информация о видео
5 апреля 2018 г. 1:14:03
00:03:46
Другие видео канала
ಶನಿ ದೋಷ ನಿವಾರಣೆಗಾಗಿ.!ಶನಿ ದೋಷ ನಿವಾರಣೆಗಾಗಿ.!ವಾರಗಳು.!ವಾರಗಳು.!ದೇವರನ್ನ ನಂಬದವರಿಗೆ ಮಾತ್ರ     ಅಹೋರಾತ್ರದೇವರನ್ನ ನಂಬದವರಿಗೆ ಮಾತ್ರ ಅಹೋರಾತ್ರಓಕೆ ಓಕೆ ಓಕೆ !ಓಕೆ ಓಕೆ ಓಕೆ !ಶಿರೋಭ್ರಮಣಕ್ಕೆ ಮದ್ದು.!ಶಿರೋಭ್ರಮಣಕ್ಕೆ ಮದ್ದು.!ವ್ಯಾಘ್ರ ನಖ !ವ್ಯಾಘ್ರ ನಖ !ನಮಸ್ತೇ ಗೆಳೆಯರೇ, ವಿಶ್ವವೆಲ್ಲಾ ವ್ಯಾಪಿಸಿರುವವನು ವಿಷ್ಣು.ನಮಸ್ತೇ ಗೆಳೆಯರೇ, ವಿಶ್ವವೆಲ್ಲಾ ವ್ಯಾಪಿಸಿರುವವನು ವಿಷ್ಣು.ಧರ್ಮ-ಅಧರ್ಮ.!ಧರ್ಮ-ಅಧರ್ಮ.!ಧರಣಿ ಗರ್ಭದಿಂದ ಹುಟ್ಟಿಬಂದಿದ್ದೆ ಮಂಗಳ, ಅದು ಅಮಂಗಳ ಹೇಗಾದೀತು  ಅಹೋರಾತ್ರಧರಣಿ ಗರ್ಭದಿಂದ ಹುಟ್ಟಿಬಂದಿದ್ದೆ ಮಂಗಳ, ಅದು ಅಮಂಗಳ ಹೇಗಾದೀತು ಅಹೋರಾತ್ರಪುಣ್ಯಕೋಟಿ !   ಅಹೋರಾತ್ರ   ಅಹೋರಾತ್ರಾಯತನ   ಸಮರಾಂಗಣ ಸೂತ್ರದಾರಪುಣ್ಯಕೋಟಿ ! ಅಹೋರಾತ್ರ ಅಹೋರಾತ್ರಾಯತನ ಸಮರಾಂಗಣ ಸೂತ್ರದಾರದೀಪ ಹಚ್ಚುವುದೆಂದರೆ ಎಣ್ಣೆ ವ್ಯರ್ಥ ಅಂತಲ್ಲ, ಆವಿಯಾಗುವ ಎಣ್ಣೆ ಎಲ್ಲರ ಆರೋಗ್ಯದ ಉಸಿರಾಗುವುದು   ಅಹೋರಾತ್ರದೀಪ ಹಚ್ಚುವುದೆಂದರೆ ಎಣ್ಣೆ ವ್ಯರ್ಥ ಅಂತಲ್ಲ, ಆವಿಯಾಗುವ ಎಣ್ಣೆ ಎಲ್ಲರ ಆರೋಗ್ಯದ ಉಸಿರಾಗುವುದು ಅಹೋರಾತ್ರಭೀಮ್ ರಾವ್ ರಾಮಜೀ ಅಂಬೇಡ್ಕರರ ಪಾದಾರವಿಂದಗಳಿಗೆ ಅಹೋರಾತ್ರನ ಶಿರಸಾಷ್ಟಾಂಗ ನಮನಗಳು !ಭೀಮ್ ರಾವ್ ರಾಮಜೀ ಅಂಬೇಡ್ಕರರ ಪಾದಾರವಿಂದಗಳಿಗೆ ಅಹೋರಾತ್ರನ ಶಿರಸಾಷ್ಟಾಂಗ ನಮನಗಳು !ಅಶ್ವತ್ಥ ಮರಅಶ್ವತ್ಥ ಮರಕಾಡಿನಲ್ಲಡಗಿದ ಗುಪ್ತ ಭೀಮಾ.ಕಾಡಿನಲ್ಲಡಗಿದ ಗುಪ್ತ ಭೀಮಾ.ಆಯುರ್ವೇದ - ಆರೋಗ್ಯ ಪ್ರಯೋಜನಗಳು.!ಆಯುರ್ವೇದ - ಆರೋಗ್ಯ ಪ್ರಯೋಜನಗಳು.!ಪ್ರೀತಿ, ಕ್ಷಮಾ, ಕರುಣೆ, ಸಹನೆ !ಪ್ರೀತಿ, ಕ್ಷಮಾ, ಕರುಣೆ, ಸಹನೆ !ಶುಂಠಿ ಮಹಿಮೆ !ಶುಂಠಿ ಮಹಿಮೆ !ಗೋವಿಂದ ರಾಜ ಸ್ವಾಮಿ.!ಗೋವಿಂದ ರಾಜ ಸ್ವಾಮಿ.!ದೇಸಿ ಹಸುವಿನ ತುಪ್ಪ.!ದೇಸಿ ಹಸುವಿನ ತುಪ್ಪ.!ಪಾದುಕೆಯ ಒಳಗುಟ್ಟು..!ಪಾದುಕೆಯ ಒಳಗುಟ್ಟು..!ಯಕ್ಷ ಪ್ರಶ್ನೆ.!ಜಗತ್ತಿನಲ್ಲಿ ಅಂತ್ಯಂತ ಸುಖಿ ಯಾರು.!? ಯಕ್ಷ ಪ್ರಶ್ನೆ.ಯಕ್ಷ ಪ್ರಶ್ನೆ.!ಜಗತ್ತಿನಲ್ಲಿ ಅಂತ್ಯಂತ ಸುಖಿ ಯಾರು.!? ಯಕ್ಷ ಪ್ರಶ್ನೆ.
Яндекс.Метрика