Загрузка...

Operation Sindoor: ಪಾಕ್‌ ವಿರುದ್ಧದ ಪ್ರತೀಕಾರ ದಾ*ಳಿಗೆ "ಆಪರೇಷನ್‌ ಸಿಂಧೂರ್‌" ಹೆಸರೇಕೆ.?

ಪಾಕ್‌ ವಿರುದ್ಧದ ಪ್ರತೀಕಾರ ದಾ*ಳಿಗೆ "ಆಪರೇಷನ್‌ ಸಿಂಧೂರ್‌" ಎಂಬ ಹೆಸರು ಏಕೆ..?

#operation #sindoor #pahalgam #modi #narendramodi #indianarmy #india #pak #soldier

OPERATION SINDOOR : ಪಾಕ್‌ ವಿರುದ್ಧದ ಪ್ರತೀಕಾರ ದಾ*ಳಿಗೆ "ಆಪರೇಷನ್‌ ಸಿಂಧೂರ್‌" ಎಂಬ ಹೆಸರು ಏಕೆ? - ಇಲ್ಲಿದೆ ಮಾಹಿತಿ

ಜೀವನದ ಸುಂದರ ಕ್ಷಣಗಳನ್ನು ಅನಭವಿಸಲು ಕಾಶ್ಮೀರಕ್ಕೆ ಬಂದಿದ್ದ ಭಾರತದ 26 ಅಮಾಯಕ ಪ್ರವಾಸಿಗರ ಜೀವಗಳನ್ನು ಬ*ಲಿತೆಗೆದುಕೊಂಡ ಪಹಲ್ಗಾಮ್ ಭ*ಯೋತ್ಪಾದಕ ದಾ*ಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು, ಆಪರೇಷನ್ ಸಿಂಧೂರ್‌ ಹೆಸರಿನಲ್ಲಿ ಮೇ 7 ರ ಬುಧವಾರ ಮುಂಜಾನೆ 1:44ಕ್ಕೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭ*ಯೋತ್ಪಾದಕ ಶಿಬಿರಗಳ ಮೇಲೆ ದಾ*ಳಿ ನಡೆಸಿದೆ.

ಒಟ್ಟು ಒಂಬತ್ತು ಸ್ಥಳಗಳಾದ ಬಹವಾಲ್ಪುರ್, ಮುರಿಡ್ಕೆ, ಗುಲ್ಪುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ಕೋಟ್ ಮತ್ತು ಮುಜಫರಾಬಾದ್ ಮೇಲೆ ನಿಖರವಾದ ದಾ*ಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಲ*ಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮತ್ತು ಜೈ*ಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಅಡಗುತಾಣಗಳ ಮೇಲೆ ದಾ*ಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಪಾಕ್‌ ಉ*ಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಭಾರದ ದಾ*ಳಿಯಲ್ಲಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ 6 ಸ್ಥಳಗಳು ದಾ*ಳಿಗೊಳಗಾಗಿದ್ದು 3 ಜನರು ಸಾವ*ನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ಕೋಟಿ, ಮುಜಫರಾಬಾದ್ ಮತ್ತು ಬಹವಾಲ್ಪುರದಲ್ಲಿ ಭಾರತೀಯ ಸೇನೆ ದಾ*ಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ. ಇನ್ನು ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಂಡಿಯನ್‌ ಆರ್ಮಿ "ನ್ಯಾಯದಾನ ಆಗಿದೆ.. ಜೈ ಹಿಂದ್‌ ಎಂದು ಬರೆದುಕೊಂಡಿದೆ "

"ಆಪರೇಷನ್‌ ಸಿಂಧೂರ್‌ " - ಇದೇ ಹೆಸರು ಏಕೆ?

ಏಪ್ರಿಲ್‌ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭ*ಯೋತ್ಪಾದಕರು ನಡೆಸಿದ ಏಕಾಏಕಿ ದಾ*ಳಿಯಲ್ಲಿ ಹಿಂದೂ ಪ್ರವಾಸಿಗರ ಮೇಲೆ ಗುಂ*ಡಿನ ಮಳೆಗೈದು ಹ*ತ್ಯೆ ಮಾಡಲಾಗಿತ್ತು. ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳಲು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉ*ಗ್ರರು ಗುಂ*ಡಿನ ದಾ*ಳಿ ನಡೆಸಿದ್ದರು

ಈ ಉ*ಗ್ರಕ್ರಿಮಿಗಳ ದಾ*ಳಿಯಲ್ಲಿ ಶಿವಮೊಗ್ಗದ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸೇರಿದಂತೆ ಪಹಲ್ಗಾಮ್‌ ಪೈಶಾಚಿಕ ದಾ*ಳಿಯಲ್ಲಿ ಬೆಂಗಳೂರಿನ ಮತ್ತಿಕೆರೆಯಲ್ಲಿ ವಾಸವಾಗಿದ್ದ ಭರತ್ ಭೂಷಣ್ (41) ಹಾಗೂ ಬೆಂಗಳೂರಿನ ಮಧುಸೂದನ್ ಸೋಮಿಶೆಟ್ಟಿ ಎಂಬ ಮೂವರು ಕನ್ನಡಿರು ಉ*ಗ್ರರ ಗುಂ*ಡೇಟಿಗೆ ಬ*ಲಿಯಾಗಿದ್ದರು. ಈ ಆಗಂತುಕರ ದಾ*ಳಿಗೆ ಒಟ್ಟು 26 ಮಂದಿಯ ಜೀವ ಹೋಗಿತ್ತು.

ಕರ್ನಾಟಕದವರ ಪಾಡು ಒಂದಾದರೆ ಆಗಷ್ಟೇ ಮದುವೆಯಾಗಿ ಹನಿಮೂನ್‌ಗೆಂದು ಕಾಶ್ಮೀರಕ್ಕೆ ಬಂದಿದ್ದ ಉತ್ತರ ಪ್ರದೇಶದ ಕಾನ್ಪುರ ಮೂಲದ ಶುಭಂ ದ್ವಿವೇದಿ ದಾರುಣವಾಗಿ ಸಾ*ವನ್ನಪ್ಪಿದ್ದರು.

ಇದೇ ದಾ*ಳಿಯಲ್ಲಿ ವಾಯುಸೇನೆ ಅಧಿಕಾರಿ ವಿನಯ್‌ ನರವಾಲ್‌ ಸಾ*ವನನ್ಪ್ಪಿದ್ದರು ಕೈ ತುಂಬಾ ಬಳೆ ತೊಟ್ಟು ತನ್ನ ಗಂಡನ ಶ*ವದ ಮುಂದೆ ಕಂಗೆಟ್ಟು ಕುಳಿತಿದ್ದ ವಿನಯ್‌ ಪತ್ನಿ ಹಿಮಾನ್ಶಿಯ ಫೋಟೋ ಪಹಲ್ಗಾಮ್‌ ದಾ*ಳಿಯ ಕ್ರೂರತೆಗೆ ಸಾಕ್ಷಿಯೆಂಬಂತೆ ಎಲ್ಲರನ್ನೂ ಕಾಡುತ್ತಿದೆ.

ಇಡೀ ಘಟನೆಯಲ್ಲಿ ಯಾವೊಬ್ಬ ಹೆಣ್ಣುಮಗಳನ್ನೂ ಕೊ*ಲ್ಲದ ಉ*ಗ್ರಗಾಮಿಗಳು ಕುಟುಂಬದ ಗಂಡಸರನ್ನೇ ಟಾರ್ಗೆಟ್‌ ಮಾಡಿದ್ದರು. ಉ*ಗ್ರರ ರಾಕ್ಷಸೀ ಕೃತ್ಯಕ್ಕೆ ನವದಂಪತಿಗಳ ಕನಸು ನುಚ್ಚು ನೂರಾಗಿದ್ದರೆ, ಹತ್ತಾರು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಪುಟಾಣಿ ಮಕ್ಕಳು ತಂದೆಯಿಲ್ಲದೇ ಜೀವನ ಎದುರಿಸುವ ಅನಿವಾರ್ಯತೆ ಬಂದಿದೆ.

ಭ*ಯೋತ್ಪಾದಕರ ದಾ*ಳಿಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡ ಹೆಣ್ಣುಮಕ್ಕಳ ಹಣೆಯಲ್ಲಿನ ಸಿಂಧೂರವೂ ಅಳಿಸಿಹೋಗಿದೆ. ಹೆಣ್ಣು ಮಕ್ಕಳ ಕುಂಕುಮ ಭಾಗ್ಯ ಕಸಿದ ಉ*ಗ್ರರ ಹೇಯ ಕೃತ್ಯದ ವಿರುದ್ಧ ಸಿಡಿದೆದ್ದ ಭಾರತ ಇದೇ ಕಾರಣಕ್ಕೆ ಪಹಲ್ಗಾಮ್‌ ದಾ*ಳಿಗೆ ಪ್ರತೀಕಾರವಾಗಿ ನಡೆಸಿದ ಪತ್ರಿದಾ*ಳಿಗೆ "ಆಪರೇಷನ್‌ ಸಿಂಧೂರ್‌" ಎಂದು ಹೆಸರಿಡಲಾಗಿದೆಯಂತೆ

Instagram Link

https://www.instagram.com/mitrara_mitra?igsh=Y2V1cDd2cjF6eGN0

Видео Operation Sindoor: ಪಾಕ್‌ ವಿರುದ್ಧದ ಪ್ರತೀಕಾರ ದಾ*ಳಿಗೆ "ಆಪರೇಷನ್‌ ಸಿಂಧೂರ್‌" ಹೆಸರೇಕೆ.? канала ಮಿತ್ರರ ಮಿತ್ರ (Mitrara Mitra)
Яндекс.Метрика

На информационно-развлекательном портале SALDA.WS применяются cookie-файлы. Нажимая кнопку Принять, вы подтверждаете свое согласие на их использование.

Об использовании CookiesПринять